ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹಾರ ಸಚಿವರಾದ ಶ್ರೀ K.H Muniyappa ,ಅಬಕಾರಿ ಸಚಿವರಾದ ಶ್ರೀ ಆರ್. ಬಿ. ತಿಮ್ಮಪುರ ಹಾಗು ನನ್ನ ನೇತೃತ್ವದಲ್ಲಿ ಸಮುದಾಯದ ಸಚಿವರು, ನಿಯೋಗದ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಭೇಟಿಯಾಗಿ, ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಈ ವೇಳೆ ಮಾಜಿ ಸಂಸದರಾದ ಶ್ರೀ ಬಿಎನ್.ಚಂದ್ರಪ್ಪ ಶ್ರೀ ಎಲ್. ಹನುಮಂತಯ್ಯ, ಶಾಸಕರಾದ ಶ್ರೀ ಶ್ರೀನಿವಾಸ್, ಶ್ರೀ ಧರ್ಮಸೇನ್ ಹಾಗೂ ರಾಜ್ಯದ ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿಗಳಾ ಗೌತಮ್ ರವರು, ಆದಿಜಾಂಭವ ನಿಗಮದ ಅಧ್ಯಕ್ಷರಾದ ಶ್ರೀಜಿ.ಎಸ್.ಮಂಜುನಾಥ್ ಉಪಸ್ಥಿತರಿದ್ದರು.







