ರಾಜ್ಯದಲ್ಲಿ ವಿವಿಧ ವೃಂದದ 56,432 ಹುದ್ದೆಗಳಿಗೆ ಒಳಮೀಸಲಾತಿ ಅನುಷ್ಠಾನ ಮಾಡುವ ಬಗ್ಗೆ. ಬೆಂಗಳೂರು ಮೌರ್ಯ ವೃತ್ತ ಮಾರ್ಚ್ 25 ಪೌರವಾಣಿ: ದಿನಾಂಕ 25.03.2026 ಬುಧವಾರ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘವು ರಾಜ್ಯದಲ್ಲಿನ ವಿಶೇಷವಾಗಿ ಅಸ್ಪಷ್ಟ ಮಾದಿಗ ಸಮುದಾಯದವರ ಅಭಿವೃದ್ಧಿಗಾಗಿ ನಿರಂತರವಾಗಿ ಕರ್ನಾಟಕ ರಾಜ್ಯ ಆದಿಜಾಂಭವ ಸಂಘ ಕಾರ್ಯ ನಿರ್ವಹಿಸುತ್ತಿದೆ. ಮಾದಿಗ ಸಮುದಾಯ ಒಕ್ಕೂಟ ವತಿಯಿಂದ ಮಾನ್ಯ ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿಗಳಾದ ಎಂ. ರಾಮಯ್ಯ ಸಾಹೇಬರ ಅವರನ್ನ ಭೇಟಿ ಮಾಡಿ ಇವತ್ತು ನಡೆದ ರ್ಯಾಲಿಯ ವಿಚಾರವನ್ನು ಚರ್ಚಿಸಿ ಮುಖ್ಯಮಂತ್ರಿಗಳಿಗೆ ಈ ಸುದ್ದಿಯನ್ನು ತಲುಪಿಸಬೇಕು ಎಂದು ಮನವಿ ಮಾಡಲಾಯಿತು ಮತ್ತು ದಿನಾಂಕ 27.03 2026ರಂದು ಬೆಳಿಗ್ಗೆ 9:00ಗೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿಸಲು ಸಮಯ ನಿಗದಿ ಮಾಡಿ ಕೊಡುತ್ತೇವೆಂದು ಭರವಸೆಯನ್ನು ಮಾನ್ಯ ಜಂಟಿ ಕಾರ್ಯದರ್ಶಿ ಮುಖ್ಯಮಂತ್ರಿಗಳಿಗೆ ಇವರು ನೀಡಿರುತ್ತಾರೆ ಎಂದು ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಾಧ್ಯಕ್ಷರಾದ ಜಂಬೂ ದ್ವೀಪ ಸಿದ್ದರಾಜುರವರು ಮತ್ತು ಪ್ರಧಾನ ಕಾರ್ಯದರ್ಶಿ ಸಿವಿ ರಮೇಶ್ ಕುಮಾರ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಮಾದಿಗ ಸಮುದಾಯ ಒಕ್ಕೂಟ ವತಿಯಿಂದ ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರವರನ್ನ ಭೇಟಿ ಮಾಡಿದ ಆದಿ ಜಾಂಬವ ಸಂಘದ ಮುಖಂಡರು.
RELATED ARTICLES







